
ಸುಡು ಸುಡುವ ಬಿಸಿಲಿನಲಿ ಸರ ಸರನೇ ಸರಿಯುತ,
ಸರಳ ಮನಸ್ಸಿನ ಮುದಿಯೊಂದು,
ಸರಾಗನೇ ಮರಬುಡಕೆ ಮೈಮರೆತು ಬಂದಿತು,
ಹಸಿವು ಬಾಯರಿಕೆ ಕಂಠಕ್ಕೆ ಮಿಲುಕಿ,
ಕಣ್ತುಂಬ ಕವಿದಿರುವ ಕಣ್ಣೀರನು ಚಿಮ್ಮುತ,
ಕನ್ನಡಕವನು ತೆಗೆದು ಕಣ್ಣನ್ನೋರೆಸಿ
ಕವಿಯಂತೇ ಕವನವನು ಹಾಡಿದಳು...
ಕಣ್ಮರೆಯಾಗದ ಆ ಸುಡುಬಿಸಿಲು ಕೆಂಡದಂತೆ ಉರಿಯೂತ್ತ,
ಕನಿಷ್ಟ ಬಟ್ಟೆಯನ್ನುಟ್ಟ ಆ ಮುದಿಯು
ಬೆರಳ್ ತುದಿಯಿಂದ ಬೇವರನ್ನೋರೆಸುತ್ತ
ಕೈಕೊಟ್ಟ ಹಣೇಬರಹ ಕಾಲ್ಗಬಿದ್ರು ಬರದೆಂದು
ಕೈಯ್ಯನ್ನಾಡಿಸುತ ಕಣ್ಮುಚ್ಚಿ ಬಿಟ್ಟಳು.....

tu likha hai??? i jusss cant belive!!!!!
ReplyDeletegood, but why did you kept it too short?
ReplyDelete