Friday, June 25, 2010


ಸುಖದ ಸುಪ್ಪತ್ತಿನೋಳ್ ಅರೆದವರ‍್ಯಾರು??
ಹೆತ್ತ ಕರುಳೋಳ್ ಬೆಚ್ಚಗೆ ಮಲಗಿಸಿದವರ‍್ಯಾರು??
ಬೆಚ್ಚನೆಯ ಮಂಚದಲಿ ಹಾಸಿಗೆ ಹಾಕಿಟ್ಟವರ‍್ಯಾರು??
ಹಿಡಿ ಅಕ್ಕಿ ಜೊಗುಳದೊಳಗಿಹಲು ಭಿಕ್ಷೇ ಬೇಡಿದವರ‍್ಯಾರು??

ಹರಿದ ಹಾಸಿಗೆಯನು ಹಸಿ ಮಾಡಿದವರ‍್ಯಾರು??
ಹಸಿವೆಂದಾಗ ಹಸುವಂತೆ ಹಸಿ ಹಾಲಿಕ್ಕುವವರ‍್ಯಾರು??
ಹಗಲೆನ್ನದೆ ಇರುಳೆನ್ನದೆ ಹಣೆಯನು ಚಪ್ಪಡಿಸುವವರ‍್ಯಾರು??
ಹಂಗಿನ ಲೋಕದಲ್ಲಿ ಕರುಳಿಗೆ ಬಿಂಬ ಕೊಟ್ಟವರ‍್ಯಾರು??

ಮೆತ್ತನೆಯ ಕೈಗಳಿಗೆ ಮಧುವಂತೆ ಚುಂಬಿಸಿದವರ‍್ಯಾರು??
ಮೂಕವಾಗಿರುವ ಯಮಗೆ ಮಾತನ್ನಿಕ್ಕಿದವರ‍್ಯಾರು??
ಮಣ್ಣನೊಕ್ಕಿರುವಾಗ ಬಾಯನ್ನು ಒರೆಸಿದವರ‍್ಯಾರು??
ಮಡಿದು ಹೋಗುತಿರುವ ಎನಗಿನ್ನು ಗತಿ ಯಾರು??????!!!!

Monday, June 14, 2010

ಮನದೋಳ ಮಾತು


ಮನಸ್ಸೊಂದು ಹೇಳಿದೆ ಮನದೋಳ ಮಾತನ್ನ
ಮುಗಿಲೆತ್ತರಕೇ ಕೂಗುತಿದೆ ಸಾಕೆಂದು ಜೀವನ
ಸೋರಿ ಹೊಗುತಲಿದೆ ಮನಸಿನ ತಾಣ
ಇನ್ನೇತಕೆ ಈ ಜೀವನ ಸೇರಬೆಕು ಸ್ಮಶಾನ.....

ಕಣ್ಣಿದ್ದು ಕುರುಡುತನ ಹಾಡಬೇಕೆ ಗುಣಗಾನ
ಮನಸಿನಲಿ ಸ್ತಿರತನ ಕಾಡುತಲಿದೆ ಮೌನತನ
ಅರ್ಥವಿಲ್ಲದ ಬದುಕಿನಲ್ಲಿ ನಡೆದಿದೆ ನನ್ನ ಪಯಣ
ಇನ್ನೇತಕೆ ಈ ಜೀವನ ಸೇರಬೆಕು ಸ್ಮಶಾನ.....

ಕಲವಿದನು ಎಂಬವ ನಾ, ಕವಿಯಾಗಬಲ್ಲೇನಾ??
ಕವಿತೆಗಳನು ಬಲ್ಲೇನಾ, ಕನಸುಗಳನು ಕಾಣೇನಾ??
ಗಡಿಯಾರದ ಜೀವನಾ ಮುಳ್ಳೇ ಮುಳ್ಳು ಈ ದಿನ
ಇನ್ನೇತಕೆ ಈ ಜೀವನ ಸೇರಬೆಕು ಸ್ಮಶಾನ.....

ಹಾಡನ್ನು ಹಾಡುತ್ತ ನಾ, ಲೋಕ ನಗಿಸಬಲ್ಲೇ ನಾ,
ಕಡೆ ಹಾಕಲಾಗದಿರುವ ಮನದೋಳದ ಬಡತನ
ಕೊನೆ ಆಗಲಿ ಈ ದಿನ, ಮಿತಿಯಿಲ್ಲದೆ ಬದುಕೆನಾ
ಇನ್ನೇತಕೆ ಈ ಜೀವನ ಸೇರಬೆಕು ಸ್ಮಶಾನ.....

ಸೇರಬೆಕು ಸ್ಮಶಾನ..... ಸೇರಬೆಕು ಸ್ಮಶಾನ.....

ಈ ಪುಟ್ಟ ಜೀವಕೇ ಆಸರೆ ನೀನಾದೇ


ಈ ಪುಟ್ಟ ಜೀವಕೇ ಆಸರೆ ನೀನಾದೇ
ನನ್ನ ಈ ಭಾವಕೇ ಹೆಸರು ನೀನಾದೇ
ಬರಿದಾದ ಈ ಜೀವಕೇ ಉಸಿರನು ನೀ ತಂದೆ
ನಿನ್ನ ಹೆಸರಿಟ್ಟು ಕೂಗುವ ಮುನ್ನ ಕೈಬಿಟ್ಟು ಹೊಗೆಂದೇ!!!

ಕಾಣದ ಜೀವಕೇ ಕಣ್ಣುಗಳನು ಕೊಟ್ಟೆ
ಕನಸಿನ ಲೋಕದಲಿ ಮೈಮರೆಸಿ ಬಿಟ್ಟೆ
ಅಂಗಳದ ಮನಸ್ಸಿಗೆ ಬೆಳದಿಂಗಳವ ಕೊಟ್ಟೆ
ಇನ್ಯಾಕೇ ನನ್ನನು ಒಬ್ಬನೇ ಮಾಡಿಬಿಟ್ಟೇ????

ಹಸಿಯಾದ ಹಣ್ಣಿಗೆ ರಸವನು ನೀ ತಂದೆ
ಹಸಿವನು ಮರೆಸಿ ನೀನೇ ಎನಗೆ ಉಸಿರೆಂದೆ
ಹತ್ತು ಜನರೆದುರಲ್ಲಿ ಏನ್ನನು ತಭ್ಭಿಕೊಂಡೆ
ಇನ್ಯಾಕೇ ನನ್ನನು ದೂರ ಮಾಡಿಕೊಂಡೆ???

Friday, February 5, 2010

ನಾನು ಕಂಡ ಕರಾಳ ದಿನ....



ಸುಡು ಸುಡುವ ಬಿಸಿಲಿನಲಿ ಸರ ಸರನೇ ಸರಿಯುತ,
ಸರಳ ಮನಸ್ಸಿನ ಮುದಿಯೊಂದು,
ಸರಾಗನೇ ಮರಬುಡಕೆ ಮೈಮರೆತು ಬಂದಿತು,

ಹಸಿವು ಬಾಯರಿಕೆ ಕಂಠಕ್ಕೆ ಮಿಲುಕಿ,
ಕಣ್ತುಂಬ ಕವಿದಿರುವ ಕಣ್ಣೀರನು ಚಿಮ್ಮುತ,
ಕನ್ನಡಕವನು ತೆಗೆದು ಕಣ್ಣನ್ನೋರೆಸಿ
ಕವಿಯಂತೇ ಕವನವನು ಹಾಡಿದಳು...

ಕಣ್ಮರೆಯಾಗದ ಆ ಸುಡುಬಿಸಿಲು ಕೆಂಡದಂತೆ ಉರಿಯೂತ್ತ,
ಕನಿಷ್ಟ ಬಟ್ಟೆಯನ್ನುಟ್ಟ ಆ ಮುದಿಯು
ಬೆರಳ್ ತುದಿಯಿಂದ ಬೇವರನ್ನೋರೆಸುತ್ತ
ಕೈಕೊಟ್ಟ ಹಣೇಬರಹ ಕಾಲ್ಗಬಿದ್ರು ಬರದೆಂದು
ಕೈಯ್ಯನ್ನಾಡಿಸುತ ಕಣ್ಮುಚ್ಚಿ ಬಿಟ್ಟಳು.....

Sunday, January 31, 2010

ನನ್ನ ಅಂದದ ಮನೆ..........


ಬಾಳಿನ ಕನಸಿನ ಅಂದದ ಅರಮನೆ ಮನದಲಿ ಕಟ್ಟಿದೆ,
ಯಾರು ನೋಡದ ಬಣ್ಣದ ಗೋಡೆಗೆ ಚಿತ್ರವ ಬಿಡಿಸಿದೆ,
ಬದುಕಿನ ಕ್ಷಣಗಳ ನಡುವಲಿ ಎಲ್ಲಾ ಮುಳ್ಳೆ ತುಂಬಿದೆ,
ಬಯಸಿದ ದಿನಗಳು ಹನಿ ಹನಿಯಾಗಿ ಹರಿದು ಹೋಗಿವೆ,
ವ್ಯಸನದ ಪಯಣವು ಹಸಿಯುವ ಮುನ್ನ ವ್ಯಥಿಸಿ ಹೋಗಿದೆ,
ವಿಷಯದ ದಿನಗಳು ಕಹಿ ಕಹಿಯಾಗಿ ತೋರಿ ನಡೆದಿವೆ,
ಮನದೋಳ ಭಾವವು ಚಿಗುರುವ ಮುನ್ನ ಮಸುಕಿ ಹೋಗಿದೆ,
ಅಂದದ ಅರಮನೆ ನನ್ನಯ ಕನಸಲಿ ಮುರಿದು ಬಿದ್ದಿದೆ,


ಕರೆಯಿತು ಆ ಕಣ್ಣು ನನ್ನನ್ನ ಕನಿಕರಿಸಿತು ನನ್ನ ಎದೆಯನ್ನ
ಕಣ್ಣಿರೇ ಕಂಡ ಆ ಕಣ್ಣಿಗೆ ಕವನ ಬರೆಯಲು ನಾ ಹೋದೆ
ಆ ಕಣ್ಣಿನ ಕಂಬನಿ ನೋಡಿ ನಾ ಕಣ್ಣಿರೆರೆದೆ,
ಆ ಕಣ್ಣಿಗೆ ರೆಪ್ಪೆಯ ಆಸರೆ ಬೇಕಿತ್ತು,
ಬಾಯಲ್ಲಿ ಹೇಳದೆ ಆ ಕಣ್ಣು ಹೆದರಿತ್ತು,
ನಾನಾಗಲು ಹೋದೆ ಆ ಕಣ್ಣಿಗೆ ರೆಪ್ಪೆಯು,
ಕನಿಕರಿಸಿ ಕರೆಯಿತು ಆ ಕಣ್ಣು ನನ್ನ ಹೃದಯವ,
ಕತ್ತಲೆಯನ್ನೇ ಕಂಡಿರುವ ಆ ಕಣ್ಣಿಗೆ ಕನಸು ಕೊಡಲು ಹೋದೆ,
ಖುಷಿಯಿಂದ ಕೂಡಿರುವ ಕಂಬನಿಯನ್ನು ಆ ಕಣ್ಣಲ್ಲಿ ನಾ ಕಂಡೆ,
ಕಸದಂತೆ ಮಾಡಿದರು ಜನ ಆ ಕಣ್ಣನ್ನ,
ಮುಸುಕಿನಲ್ಲಿ ಹಿಸುಕಿದರು ಆ ಕಣ್ಣಿನ ಮನಸನ್ನ,
ಮನದೋಳದ ಆಸೆ ಕಣ್ಣಲ್ಲೇ ಕರಗಿ ಹೋಯಿತು,
ಕಂಬನಿ ತುಂಬಿದ ಈ ಕಣ್ಣು ಸದಾ ಆ ಕಣ್ಣನ್ನೇ ಕಾಯತೊಡಗಿತು .....

JANUARY 30, 2010 2:21 AM

Friday, January 29, 2010

ಕಂಡರಿಯದ ಕವಿ.....


ಕವಿಯಂತು ನಾನಲ್ಲಾ ಕವನವು ನನಗೆ ಗೊತ್ತಿಲ್ಲಾ
ಅರಿಯದೆ ಬರೆಯಲು ಹೊದೆ ಕವನವನ್ನು
ಕರೆದರು ಜನ ನನ್ನ ಕವಿಯೆಂದು

ಕಲೆಯನ್ನೇ ನಂಬಿದ ನಾನು ಕವನಕ್ಕೆ ಮರುಳಾದೆ
ಕಲೆಯನ್ನು ರಚಿಸಲು ಹೋಗಿ ಕವನಗಳನ್ನು ಬರೆದೆ

ಬೆರಳಿಟ್ಟ ಸಾಲಿನಲಿ ಬಣ್ಣ ತುಂಬಲು ಹೋದೆ
ಬಯಸದೇ ಬಂದ ಸಾಲಿನಲಿ ಬರೆಯುತ್ತಾ ಕುಳಿತೆ

ಕೆತ್ತನೆಯ ಕೈಗಳಿಗೆ ಕವನವೇ ಆಸರೆ ಎಂದೇ
ಕವನಗಳನ್ನು ರಚಿಸುತ್ತಾ ಕಲೆಯನ್ನೇ ಮರೆತೆ

ಕರೆಯದಿರಿ ನೀವೇನ್ನ ಕವಿಯೆಂದು
ಇರಲು ಬಯಸುವೆನು ಕಲಾವಿದನೆಂದು......